HitXP - ತೋಚಿದ್ದು ಗೀಚಿದ್ದು- ಗುರುದೇವ್ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
  • Dec
    31

    ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

    ಗುರುದೇವ; ವಿಭಾಗ: ಸಾಹಿತ್ಯ;

    ಏರಿದರೆ ಮಂಚ ಗದ್ದುಗೆ ಸಿಂಹಾಸನ
    ಹೆಚ್ಚೆಂದರೆ ಎರಡು ಮೂರಡಿ ಮೇಲೆ
    ಜಾರಿದರೆ ಗೋರಿ ಸಮಾಧಿ ಬೃಂದಾವನ
    ಹೆಚ್ಚೆಂದರೆ ಎರಡು ಮೂರಡಿ ಕೆಳಗೆ
    - ಜರಗನಹಳ್ಳಿ ಶಿವಶಂಕರ್ ರವರ ಒಂದು ಅದ್ಭುತ ಚುಟುಕ

    ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
    - ಭಕ್ತ ಕುಂಬಾರ ಚಿತ್ರದ ಗೀತೆಯೊಂದರಲ್ಲಿ ಬರುವ ಅದ್ಭುತ ಸಾಲು.

    ರಾಜ ಮಹಾರಾಜರು ಎಲ್ಲ ಮಣ್ಣಾದರು ಇನ್ನು ಸ್ಥಿರವಾಗಿ ನಿಲ್ಲೋರು ಯಾರು
    ಒಳ್ಳೆ ಹಣವಂತರು ಇಲ್ಲಿ ಹೆಣವಾದರು ಇನ್ನು ಚಿರಕಾಲ ಬಾಳೋರು ಯಾರು
    - ರಾಘವೇಂದ್ರ ರಾಜ್‍ಕುಮಾರ್ ನಟಿಸಿರುವ ಚಿತ್ರದ ಗೀತೆಯೊಂದರ ಸಾಲು

    ನಾವು ಬರುವಾಗ ಏನನ್ನೂ ಹೊತ್ತುಕೊಂಡು ಬರೊಲ್ಲ
    ಮರಳಿ ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗೊಲ್ಲ
    - ಒಂದು ಗಾದೆ

    ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
    ನಮಗೆ ಏಕೆ ಬಾರದೊ?
    - ದ. ರಾ. ಬೇಂದ್ರೆ

      Copyright secured by Digiprove © 2009 Gurudev Rao

ಪ್ರತಿಕ್ರಿಯೆ ಬರೆಯಿರಿ