ಏರಿದರೆ ಮಂಚ ಗದ್ದುಗೆ ಸಿಂಹಾಸನ
ಹೆಚ್ಚೆಂದರೆ ಎರಡು ಮೂರಡಿ ಮೇಲೆ
ಜಾರಿದರೆ ಗೋರಿ ಸಮಾಧಿ ಬೃಂದಾವನ
ಹೆಚ್ಚೆಂದರೆ ಎರಡು ಮೂರಡಿ ಕೆಳಗೆ
- ಜರಗನಹಳ್ಳಿ ಶಿವಶಂಕರ್ ರವರ ಒಂದು ಅದ್ಭುತ ಚುಟುಕ
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
- ಭಕ್ತ ಕುಂಬಾರ ಚಿತ್ರದ ಗೀತೆಯೊಂದರಲ್ಲಿ ಬರುವ ಅದ್ಭುತ ಸಾಲು.
ರಾಜ ಮಹಾರಾಜರು ಎಲ್ಲ ಮಣ್ಣಾದರು ಇನ್ನು ಸ್ಥಿರವಾಗಿ ನಿಲ್ಲೋರು ಯಾರು
ಒಳ್ಳೆ ಹಣವಂತರು ಇಲ್ಲಿ ಹೆಣವಾದರು ಇನ್ನು ಚಿರಕಾಲ ಬಾಳೋರು ಯಾರು
- ರಾಘವೇಂದ್ರ ರಾಜ್ಕುಮಾರ್ ನಟಿಸಿರುವ ಚಿತ್ರದ ಗೀತೆಯೊಂದರ ಸಾಲು
ನಾವು ಬರುವಾಗ ಏನನ್ನೂ ಹೊತ್ತುಕೊಂಡು ಬರೊಲ್ಲ
ಮರಳಿ ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗೊಲ್ಲ
- ಒಂದು ಗಾದೆ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
- ದ. ರಾ. ಬೇಂದ್ರೆ

No Comments Yet - be the First!